ರೈತರ ಸಲುವಾಗಿ ಬಂದಿದೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ಏನಿದು, ಹೇಗೆ ಅರ್ಜಿ ಸಲ್ಲಿಸಬೇಕು?

ಕರ್ನಾಟಕದ ರೈತ ಬಂಧುಗಳೇ, ನಿಮ್ಮ ಬೆಳೆಗಳಿಗೆ ನೈಸರ್ಗಿಕ ವಿಪತ್ತು ಅಥವಾ ಕೀಟಬಾಧೆಗಳಿಂದ ಹಾನಿಯಾದ್ರೆ ಚಿಂತೆ ಬೇಡ! ಭಾರತ ಸರ್ಕಾರ ನಿಮ್ಮ ಬೆನ್ನೆಲಿಗೆ ನಿಂತಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಮೂಲಕ ನಿಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು. ಈ ಯೋಜನೆಯ ಬಗ್ಗೆ ಸರಳವಾಗಿ ತಿಳಿದುಕೊಳ್ಳೋನ.

WhatsApp Group Join Now
Telegram Group Join Now

Pradhan Mantri Fasal Bima Yojana

ಏನಿದು ಈ ಯೋಜನೆ?

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಒಂದು ರೀತಿಯ ಬೆಳೆ ವಿಮಾ ಯೋಜನೆ. ನಿಮ್ಮ ಬೆಳೆಗಳಿಗೆ ನೀವು ವಿಮೆ ಮಾಡಿಸಿದ್ದು, ನೈಸರ್ಗಿಕ ವಿಪತ್ತು, ಬರಗಾಲ, ಅತಿವೃಷ್ಟಿ, ಕೀಟಬಾಧೆ ಇತ್ಯಾದಿಗಳಿಂದ ಹಾನಿಯಾದರೆ ಸರ್ಕಾರ ನಿಮಗೆ ಪರಿಹಾರ ನೀಡುತ್ತದೆ. ಈ ಪರಿಹಾರದಿಂದ ನಿಮ್ಮ ನಷ್ಟವನ್ನು ಸರಿದೂಗಿಸಿಕೊಂಡು ಮುಂದಿನ ಬೆಳೆಗೆ ಸಿದ್ಧತೆ ಮಾಡಿಕೊಳ್ಳಬಹುದು.

ಯೋಜನೆಯ ಲಾಭಗಳು:

  • ಕಡಿಮೆ ರೊಕ್ಕ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣದ ಮೇಲೆ ಸಬ್ಸಿಡಿ ನೀಡುವುದರಿಂದ ರೈತರು ಕಡಿಮೆ ಹಣ ಕಟ್ಟಬೇಕಾಗುತ್ತದೆ.
  • ಬೆಳೆ ನಷ್ಟದ ಪರಿಹಾರ: ಬೆಳೆ ಹಾನಿಯಾದಾಗ ವಿಮಾ ಮೊತ್ತವನ್ನು ರೈತರಿಗೆ ನೀಡಲಾಗುತ್ತದೆ. ಇದರಿಂದ ರೈತರು ನಷ್ಟವನ್ನು ತುಂಬಿಕೊಳ್ಳಲು ಮತ್ತು ಮುಂದಿನ ಬೆಳೆಗೆ ಸಿದ್ಧತೆ ಮಾಡಲು ಸಹಾಯವಾಗುತ್ತದೆ.
  • ಸುಲಭ ಅರ್ಜಿ: ಬ್ಯಾಂಕುಗಳು, ಕೃಷಿ ಸೇವಾ ಕೇಂದ್ರಗಳು, ಗ್ರಾಮ ಪಂಚಾಯತುಗಳ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಇದನ್ನು ಸಹ ಓದಿ:₹2000/- ಬರ ಪರಿಹಾರದ ಹಣ ಜಮಾ ಆಗದಿದ್ದರೆ ಏನು ಮಾಡಬೇಕು? ಇಲ್ಲಿದೆ ಈದಕ್ಕೆ ಸಂಪೂರ್ಣ ಮಾಹಿತಿ.

ಯಾವ ಬೆಳೆಗಳಿಗೆ ವಿಮೆ?

ಕರ್ನಾಟಕದಲ್ಲಿ 60ಕ್ಕೂ ಹೆಚ್ಚು ಬೆಳೆಗಳಿಗೆ ಈ ಯೋಜನೆಯಡಿ ವಿಮೆ ಪಡೆಯಬಹುದು. ಭತ್ತ, ರಾಗಿ, ಜೋಳ, ತೋಟಗಾರಿಕೆ ಬೆಳೆಗಳು ಇದಕ್ಕೆ ಕೆಲವು ನಿದರ್ಶನಗಳು. ನಿಮ್ಮ ಪ್ರದೇಶದಲ್ಲಿ ಯಾವ ಬೆಳೆಗಳಿಗೆ ವಿಮೆ ಇದೆ ಎಂಬುದನ್ನು ಕೃಷಿ ಇಲಾಖೆಯಲ್ಲಿ ತಿಳಿದುಕೊಳ್ಳಬಹುದು.

ಬೆಳೆ ವಿಮೆ ಹೇಗೆ ಪಡೆಯುವುದು?

ಬೆಳೆ ವಿಮೆ ಪಡೆಯುವುದು ಬಹಳ ಸುಲಭ. ನಿಮ್ಮ ಹತ್ತಿರದ ಸಹಕಾರ ಸಂಘ ಅಥವಾ ಕೃಷಿ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು. ಅಲ್ಲಿಯ ಅಧಿಕಾರಿಗಳು ನಿಮ್ಮ ಬೆಳೆ, ಪ್ರದೇಶದ ಮಾಹಿತಿಯನ್ನು ಪಡೆದುಕೊಂಡು ವಿಮೆಯ ಮೊತ್ತವನ್ನು ನಿಗದಿಗೊಳಿಸುತ್ತಾರೆ. ನಿಮ್ಮ ಬೆಳೆಗೆ ತಕ್ಕ ರೊಕ್ಕ (ಬಿಮೆ ಶುಲ್ಕ) ಪಾವತಿ ಮಾಡಿದ ನಂತರ ವಿಮೆ ಪಡೆಯಬಹುದು. ಸರ್ಕಾರ ಕೂಡ ಹಣದ ಒಂದು ಭಾಗವನ್ನು ಭರಿಸುತ್ತದೆ.

ಬೆಳೆ ಹಾನಿ ಆದ್ರೆ ಏನು ಮಾಡಬೇಕು?

ನಿಮ್ಮ ಬೆಳೆಗೆ ಹಾನಿ ಆದ್ರೆ, ತಕ್ಷಣ ಕೃಷಿ ಇಲಾಖೆ . ಅವರು ನಿಮ್ಮ ಬೆಳೆ ಹಾನಿಯನ್ನು ಪರಿಶೀಲಿಸಿ, ನಿಮಗೆ ಪರಿಹಾರ ನೀಡುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ:

  • ಯೋಜನೆಯ ಅವಧಿ ಖುಲಾಸೆ ಮೊದಲು ರೈತರು ತಮ್ಮ ಬ್ಯಾಂಕು ಅಥವಾ ಕೃಷಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿಬೇಕು.
  • ಬೆಳೆ, ಹೊಲದ ವಿಸ್ತೀರ್ಣ, ಇತರೆ ಮಾಹಿತಿಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕು.
  • ನಿಗದಿಪಡಿಸಿದ ರೊಕ್ಕದ ಮೊತ್ತವನ್ನು ಕಟ್ಟಬೇಕು.
  • ಸರಿಯಾದ ದಾಖಲೆಗಳನ್ನು ಒದಗಿಸಬೇಕು (ಆಧಾರ್ ಕಾರ್ಡ್, ಭೂಸಾಗುವಳಿ ಚೀಟಿ, ಬ್ಯಾಂಕ್ ಪಾಸ್‌ಬುಕ್ ಇತ್ಯಾದಿ).
  • ಅರ್ಜಿ ಸಲ್ಲಿಸಿದ ನಂತರ ರೈತರಿಗೆ ವಿಮಾ ಪಾಲಿಸಿ ನೀಡಲಾಗುತ್ತದೆ.

ಇದನ್ನು ಸಹ ಓದಿ:ರೈತರಿಗೆ ಸಿಹಿಸುದ್ದಿ! ಈ ಬ್ಯಾಂಕ್‌ನಲ್ಲಿ ಸಾಲ ಮಾಡಿದವರ ಸಾಲ ಮನ್ನಾ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು ಕೃಷಿ ಇಲಾಖೆಯ ವೆಬ್‌ಸೈಟ್ ಅನ್ನು ಭೇಟಿ ಮಾಡಬಹುದು :https://pmfby.gov.in/

This is not investment advice only giving information about what are the different Government scheme .

WhatsApp Group Join Now
Telegram Group Join Now

Leave a comment